ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಕೀಟಗಳ ನಿರ್ವಹಣೆ ಜಯಲಕ್ಷ್ಮೀ ನಾರಾಯಣ ಹೆಗಡೆ. Krushi mathu thotagaarike belegalalli keetagala nirvahane Jayalakshmi Narayana Hegade.
Material type: TextLanguage: Kan Publisher: ಇರುವಕ್ಕಿ, ಶಿವಮೊಗ್ಗ : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, 2022; Iruvakki, Shivamogga : Keladi Shivappa Nayak Krushi mathu Thotagaarike Vignanagala Vishwavidyalaya, 2022Description: viii, 288 ಪುಟಗಳು : ಚಿತ್ರಗಳು ; 24 ಸೆಂ.ಮೀISBN: 9789395408028Subject(s): ನಿರ್ವಹಣಾ ಕ್ರಮಗಳು | ಹಾನಿಯ ಲಕ್ಷಣಗಳು | ಜೈವಿಕ ಹತೋಟಿ | ಬೇಸಾಯ ಕ್ರಮಗಳು | ಕೀಟನಾಶಕಗಳ ಬಳಕೆDDC classification: K.632.9Item type | Current location | Call number | Status | Date due | Barcode |
---|---|---|---|---|---|
Books | GKVK Library | K.632.9 HEG (Browse shelf) | Available | 148474 | |
Books | GKVK Library | K.632.9 HEG (Browse shelf) | Available | 148475 | |
Books | GKVK Library | K.632.9 HEG (Browse shelf) | Available | 148476 | |
Books | GKVK Library | K.632.9 HEG (Browse shelf) | Available | 148477 | |
Books | GKVK Library | K.632.9 HEG (Browse shelf) | Available | 148478 | |
Books | GKVK Library | K.632.9 HEG (Browse shelf) | Available | 148479 |
ಕೀಟಗಳು ಮನುಷ್ಯನಿಗಿಂತ ಮೊದಲೇ ಭೂಮಿಯ ಮೇಲೆ ಅಸ್ತಿತ್ವದಲ್ಲಿದ್ದವು. ಮನುಷ್ಯನು ತನ್ನ ಉಪಯೋಗಕ್ಕಾಗಿ ವಿವಿಧ ಬೆಳೆಗಳನ್ನು ಬೆಳೆಯತೊಡಗಿದ. ಅಂದಿನಿಂದ ಕೀಟಗಳು ಬೆಳೆಗಳನ್ನು ಹಾನಿಮಾಡಲು ಪ್ರಾರಂಭಿಸಿವೆ. ಕೀಟಗಳು ಹಾವಳಿಯಿಂದ ಬಳೆಗಳನ್ನು ರಕ್ಷಿಸಲು ಮನುಷ್ಯ ರಾಸಾಯನಿಕ ಕೀಟನಾಶಕಗಳನ್ನು ಬಳಸಲು ಪ್ರಾರಂಭಿಸಿದ. ಈ ರಾಸಾಯನಿಕ ಕೀಟನಾಶಕಗಳ ಬಳಕೆಯಿಂದ ಬೆಳೆಗಳಲ್ಲಿ ಕೀಟಗಳ ಹತೋಟಿಯ ಜೊತೆಗೆ ರಾಸಾಯನಿಕ ಉಳಿಕೆ ವಿಷಕಾರತೆ ಕಂಡುಬಂದು ಇದು ಆ ಬೆಳೆಗಳನ್ನು ಹಾಗೂ ಬೆಳೆಗಳ ಉತ್ಪನ್ನಗಳನ್ನು ಸೇವಿಸುವವರ ಆರೋಗ್ಯದ ಮೇಲೆ ಹಲವಾರು ಪರಿಣಾಮ ಬೀರುತ್ತಿರುವುದು ಬಿಡಿಸಲಾಗದ ಕಗ್ಗಂಟಾಗಿರುತ್ತದೆ. ಅಲ್ಲದೇ, ಇತ್ತೀಚಿನ ದಿನಗಳಲ್ಲಿ ಸುಧಾರಿತ ತಳಿಗಳ ಬಿಡುಗಡೆ, ನಿರಂತರ ಕೀಟನಾಶಕಗಳ ಬಳಕೆ, ಕೀಟನಾಶಕಗಳ ಅವೈಜ್ಞಾನಿಕ ಬಳಕೆ, ಹವಾಮಾನ ವೈಪರಿತ್ಯ ಇತ್ಯಾದಿಗಳಿಂದ ಕೀಟಗಳ ಬಾಧೆ ಉಲ್ಬಣಗೊಂಡಿದೆ. ಇದರ ನಿರ್ವಹಣೆಗೆ ಕೃಷಿಕರು ಅಗತ್ಯಕ್ಕಿಂತ ಹೆಚ್ಚಿನ ಕೀಟನಾಶಕಗಳನ್ನು ಅವೈಜ್ಞಾನಿಕವಾಗಿ ಬಳಸುತ್ತಿದ್ದಾರೆ. ಬೆಳೆಗಳಲ್ಲಿ ಕೀಟನಾಶಕಗಳ ಅವ್ಯಾಹತ ಬಳಕೆಯಿಂದ ಕೀಟಗಳಲ್ಲಿ ಕೀಟ ನಿರೋಧಕ ಶಕ್ತಿ ಬೆಳವಣಿಗೆ, ಪರಭಕ್ಷಕ/ಪರತಂತ್ರ ಕೀಟಗಳ ನಾಶ, ಜೇನು ನೊಣ ಹಾಗೂ ಇತರೆ ಪರಾಗಸ್ಪರ್ಶ ಕೀಟಗಳ ನಾಶ, ಅಪ್ರಮುಖ ಕೀಟಗಳು ಪ್ರಮುಖ ಕೀಟಗಳಾಗಿ ಅಭಿವೃದ್ಧಿ ಹೊಂದಿರುವುದು, ಪರಿಸರ ಮಾಲಿನ್ಯತೆ, ಮನುಷ್ಯ ಮತ್ತು ಪ್ರಾಣಿಗಳ ಮೇಲೆ ವಿಷಕಾರಿ ಅಂಶ ಬೀರಿರುವುದು ಇತ್ಯಾದಿ ಸಮಸ್ಯೆಗಳು ಉದ್ಭವವಾಗಿದೆ. ಆದ್ದರಿಂದ ರೈರತು ಪ್ರತಿ ಬೆಳೆ ಬೆಳೆಯುವಾಗಲೂ, ಬೇಸಾಯದ ಪರಿಸರವನ್ನು ಸಂಪೂರ್ಣ ಅರ್ಥಮಾಡಿಕೊಂಡು, ಬೇಸಾಯಕ್ಕೆ ಸರಿಯಾದ ಪರಿಸರವನ್ನು ರೂಪಿಸಿಕೊಂಡು ಕೀಟಗಳ ಹಾನಿಯ ಮಟ್ಟವನ್ನು ತಿಳದುಕೊಂಡು, ಬೆಳೆಗಳಲ್ಲಿ ಕೀಟ ಬಾಧೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ತಿಳಿದು, ಹಾನಿಯ ಲಕ್ಷಣಗಳನ್ನು ಅರಿತು ಸಕಾಲದಲ್ಲಿ ಸರಿಯಾದ ಕೀಟ ನಿರ್ವಹಣಾ ಕ್ರಮವನ್ನು ಅನುಸರಿಸಬೇಕು. ಆಗ ಮಾತ್ರ ಬೆಳೆಗಳಲ್ಲಿ ಸಕಾಲದಲ್ಲಿ ಕೀಟ ಪೀಡೆಗಳ ಹತೋಟಿಯನ್ನು ಯಶಸ್ವಿಯಾಗಿ ಮಾಡಿ ಉತ್ತಮವಾದ ಬೆಳೆಯನ್ನು ಬೆಳೆದು, ನಿರೀಕ್ಷಿಸಿದ ಮಟ್ಟದ ಆರ್ಥಿಕ ಇಳುವರಿ ಪಡೆಯಬಹುದು.
ಪ್ರಸ್ತುತ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಕೀಟಗಳ ನಿರ್ವಹಣೆ ಪುಸ್ತಕದಲ್ಲಿ, ಪ್ರಮುಖ ಆಹಾರ ಬೆಳೆಗಳು, ಎಣ್ಣೆಕಾಳು ಬೆಳೆಗಳು, ತರಕಾರಿ ಬೆಳೆಗಳು, ಹಣ್ಣಿನ ಬೆಳೆಗಳು, ತೋಟದ ಬೆಳೆಗಳು ಹಾಗೂ ಹೂವಿನ ಬೆಳೆಗಳಲ್ಲಿ ಕೀಟಗಳ ನಿರ್ವಹಣೆ ಕುರಿತು ಅಗತ್ಯ ಮಾಹಿತಿಗಳನ್ನು ಒಟ್ಟಾರೆ 53 ಅಧ್ಯಾಯಗಳಲ್ಲಿ ವಿವರಿಸಲಾಗಿದೆ. ಕೀಟಗಳ ನಿರ್ವಹಣೆ ಕುರಿತು ಅಗತ್ಯ ಮಾಹಿತಿಗಳನ್ನು ಒಟ್ಟಾರೆ 53 ಅಧ್ಯಾಯಗಳಲಿ ವಿವರಿಸಲಾಗಿದೆ. ಕೀಟಗಳ ನಿರ್ವಹಣೆ ಕುರಿತಂತೆ ಲಖಕರು ಮಂಡಿಸಿರುವ ವಿಚಾರಗಳು ಸರಳ, ಅನುಭವಪೂರ್ಣ ಹಾಗೂ ಅರ್ಥಪೂರ್ಣವಾಗಿವೆ.
ಭತ್ತ -- ರಾಗಿ -- ಗೋಧಿ -- ಸಜ್ಜೆ -- ಮೆಕ್ಕೆಜೋಳ -- ಜೋಳ -- ಹೆಸರು ಮತ್ತು ಉದ್ದು -- ಕಡಲೆ --ತೊಗರಿ -- ಅಲಸಂದಿ -- ಸೂರ್ಯಕಾಂತಿ -- ಶೇಂಗಾ (ನೆಲಗಡಲೆ) -- ಕುಸುಬೆ -- ಎಳ್ಳು -- ಸೋಯಾಅವರೆ -- ಹತ್ತಿ -- ತಂಬಾಕು -- ಕಬ್ಬು -- ಟೊಮಾಟೊ -- ಬದನೆ -- ಬೆಂಡೆ -- ಮೆಣಸಿನಕಾಯಿ -- ಎಲೆಕೋಸು -- ಈರುಳ್ಳಿ (ಉಳ್ಳಾಗಡ್ಡಿ) -- ಬೆಳ್ಳುಳ್ಳಿ -- ಬಟಾಣಿ -- ಶುಂಠಿ -- ಅರಿಶಿನ -- ವೀಳ್ಯದೆಲೆ (ಎಲೆಬಳ್ಳಿ) ಕಾಳುಮೆಣಸು -- ಏಲಕ್ಕಿ -- ಅಡಿಕೆ -- ತೆಂಗು -- ಗೋಡಂಬಿ -- ಬಾಳೆ -- ಮಾವು -- ದಾಳಿಂಬೆ -- ಲಿಂಬೆ -- ಅನಾನಸ್ -- ಪಪಾಯ -- ಕಾಫಿ -- ಕೋಕೋ -- ಅಲೂಗಡ್ಡೆ -- ಸುಗಂಧರಾಜ -- ಮಲ್ಲಿಗೆ -- ಸೇವಂತಿಗೆ -- ಗುಲಾಬಿ -- ಸೌತೆಕಾಯಿ
There are no comments on this title.